Kannadasonglyrics

Kannadasonglyrics

ಪ್ರಿಯ ಓದುಗರೇ,

ಪ್ರಿಯ ಓದುಗರೇ, ಕನ್ನಡದ ಬಗ್ಗೆ, ಕನ್ನಡದ ಚಿತ್ರ ಸಾಹಿತ್ಯದ ಬಗ್ಗೆ ಅಂತರ್ಜಾಲದಲ್ಲಿರುವ ಮಾಹಿತಿ ಕಡಿಮೆಯೇ, ಅದಕ್ಕಾಗಿ, ನಿಮಗೆ ಚಿತ್ರ ಸಾಹಿತ್ಯ ಅಂತರಜಾಲದಲ್ಲಿ ಸಿಗಲಿ ಎಂದು , ನನ್ನ ಒಂದು ಕಿರು ಪ್ರಯತ್ನ. ನಿಮಗೆ ಬ್ಲಾಗಿನಲ್ಲಿ ಏನಾದರೂ ತಿದ್ದುಪಡಿಗಳಿದ್ದರೆ ದಯವಿಟ್ಟು ಕಾಮೆಂಟ್ಸ್ನಲ್ಲಿ ಬರೆಯಿರಿ, ಇದರಿಂ ನಿಮಗೆ ಇನ್ನೂ ಒಳ್ಳೆಯ ಮಾಹಿತಿ ಸಂಗ್ರಹ ನೀಡಲು ಸಹಾಯವಾಗುತ್ತದೆ. ನಿಮಗೆ ಯಾವುದಾದರೂ ಗೀತೆಯ ಸಾಹಿತ್ಯ ಬೇಕಿದ್ದರೆ ಅದನ್ನು ಕೂಡ ಅದರಲ್ಲಿ ಬರೆದರೆ ನಿಮಗೆ ತಲುಪಿಸಲು ಪ್ರಯತ್ನಿಸುತ್ತೇವೆ .

Clicksor

Chitika

ಪುಟಗಳು

b

ಶನಿವಾರ 20 ಅಕ್ಟೋಬರ್ 2012

ಗಡಿಬಿಡಿ ಗಂಡ (1993) - ಮುದ್ದಾಡೆಂದಿದೆ ಮಲ್ಲಿಗೆ ಹೂ, Gadibidi Ganda - 1993 - Muddadendide Mallige Hoo Lyrics

ಚಿತ್ರ: ಗಡಿಬಿಡಿ ಗಂಡ
ಸಂಗೀತ/ಸಾಹಿತ್ಯ: ಹಂಸಲೇಖ
ಗಾಯಕ/ಗಾಯಕಿ: ಎಸ್.ಪಿ.ಬಿ, ಚಿತ್ರ

[ಎಸ್.ಪಿ.ಬಿ]
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ..ಮೊದಲು ಸಂಪಿಗೆಯ
ಸಂಪಿಗೆಯ..ಮೊದಲು ಮಲ್ಲಿಗೆಯ
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ
-------------------------೧-----------------------------
[ಚಿತ್ರ]
ಆ ಆ ಆ ......
ಮುಡಿಯಲಿ ಮಲ್ಲಿಗೆಯ ಮುಡಿದವಳ
ಮೊದಲು ಮುಡಿಯಬೇಕು
ಮಡದಿಗೆ ಪ್ರತಿದಿನವೂ
ಮೊದಲಿರುಳಿರಬೇಕು
[ಎಸ್.ಪಿ.ಬಿ]
ಮನಸಿನ ಮಧುವಿನ ಮಹಲೊಳಗೆ
ಮದನ ಮಣಿಯಬೇಕು
ಸುರತಿಯ ಪರಮಾನ್ನ
ಹಿತಮಿತವಿರಬೇಕು
[ಚಿತ್ರ]
ವಿರಹಬಾಧೆ ದಹಿಸುವಾಗ..ಬಾಲಬೋಧೆ ಏಕೆ
[ಎಸ್.ಪಿ.ಬಿ]
ಪ್ರಣಯ ನದಿಯೆ ತುಳುಕುವಾಗ..ಮದನ ಮಳೆಯು ಬೇಕೆ
[ಚಿತ್ರ]
ಹಿಡುದುಕೊ..ಮೆಲ್ಲಗೆ
[ಎಸ್.ಪಿ.ಬಿ]
ತಡೆದುಕೊ..ಮಲ್ಲಿಗೆ
[ಚಿತ್ರ]
ಹರೆಯ..ನೆರೆಯ..ತಡೆಯೊ..ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ..ಮೊದಲು ಸಂಪಿಗೆಯ
ಸಂಪಿಗೆಯ..ಮೊದಲು ಮಲ್ಲಿಗೆಯ
[ಎಸ್.ಪಿ.ಬಿ]
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ
----------------------------೨--------------------------------
[ಚಿತ್ರ]
ಆ ಆ ಆ ......
ಘಮ ಘಮ ಸಂಪಿಗೆಯ ಸುಮತಿಯನು
ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ
ಪ್ರಳಯವ ತಾರದಿರು
[ಎಸ್.ಪಿ.ಬಿ]
ಹಿಡಿಯಲಿ ಹಿಡಿಯುವ ನಡುವಿನಲಿ
ಬಳುಕಿ ಬೇಯಿಸದಿರು
ತುಂಬಿದ ನಿಶೆ ಒಲೆಗೇ
ಚಂದ್ರನ ಕೂಗದಿರು
[ಚಿತ್ರ]
ಎದೆಯ ಸೆರಗ ಮೋಡದಲ್ಲಿ..ನೀನೆ ಚಂದ್ರನೀಗ
[ಎಸ್.ಪಿ.ಬಿ]
ಹೃದಯ ಮೇರು ಗಿರಿಗಳಲ್ಲಿ..ಕರಗಬೇಕೆ ಈಗ
[ಚಿತ್ರ]
ಬಳಸಿಕೊ..ಕಂಪಿಗೆ
[ಎಸ್.ಪಿ.ಬಿ]
ಸಹಿಸಿಕೊ..ಸಂಪಿಗೆ
[ಚಿತ್ರ]
ಹರೆಯ..ಹೊರೆಯ..ಇಳಿಸೊ..ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ..ಮೊದಲು ಸಂಪಿಗೆಯ
ಸಂಪಿಗೆಯ..ಮೊದಲು ಮಲ್ಲಿಗೆಯ
[ಎಸ್.ಪಿ.ಬಿ]
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ

ಬುಧವಾರ 17 ಅಕ್ಟೋಬರ್ 2012

Kariya - Nannali Naanilla manadali neenella..Udit Narayan

ಗಾಯಕ; ಉದಿತ್ ನಾರಾಯಣ್
ಸಂಗೀತ : ಗುರುಕಿರಣ್
ಸಾಹಿತ್ಯ:ವಿ. ನಾಗೇಂದ್ರಪ್ರಸಾದ್

ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ
ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ
ನೀನೇನೆ ನಾನಾದೆ
ನಾನೇಕೆ ಹೀಗಾದೆ
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ
ಒಹ್ ದೇವ ಇಂದು ಅವಳಿಲ್ಲಿ ಬಂದು
ತಾನಾಗಿ ಎಲ್ಲ ಹೇಳಲಿ
ಇಂದಾದರೂನು ನಾ ಹೇಳಲೇನು
ಆ ಧೈರ್ಯವಿಲ್ಲ ನನ್ನಲಿ
ಒಹ್ ಮಾತಿಂದ ಮೌನ ಮರೆಯಾಗಲಿ
ನನ್ನಯ ತನವೆಲ್ಲ ಕಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ
ಆ ಒಂದು ಮಾತು ತುಟಿಮೇಲೆ ನಿಂತು
ಧನಿ ಆಗಲೆಂದೆ ಕಾದಿದೆ
ನಾ ಹೇಳಬೇಕೆ ನೀ ಹೇಳಬೇಕೆ
ಈ ಪ್ರೀತಿ ಎಲ್ಲ ಹೇಳದೆ
ಯಾರಾದರೇನು ಅನ್ನಬಾರದೆ
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ
ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ
ನೀನೇನೆ ನಾನಾದೆ
ಹೆ : ನಾನೇಕೆ ಹೀಗಾದೆ

Related Posts Plugin for WordPress, Blogger...