Gaalipata (2008) - Kannada Songs Lyrics, Ganesh, Diganth,Rajesh Krishna

Aakasha Ishte yaakideyo.....

ನನ್ನ್ ನೈನನನೈ, ನನ್ನ್ ನೈನನನೈ, ನನ್ನ್ ನೈನನನೈ, ನೈ, ನನ್ನ್ ನೈನನನೈ - ೨




ಆಕಾಶ ಇಷ್ಟೆ ಯಾಕಿದೆಯೊ [ನನ್ನ್ ನೈನನನೈ]

ಈ ಭೂಮಿ ಕಷ್ಟ ಆಗಿದೆಯೊ [ನನ್ನ್ ನೈನನನೈ]

ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ

ಮುಗಿಲನ್ನೆ ಮುದ್ದಾಡಿ, ರೆಕ್ಕೆ ಬಿಚ್ಚಿ ಹಾರೊ ನಾವೆ

ಗಾಳಿಪಟ...ಗಾಳಿಪಟ...ಗಾಳಿಪಟ...



ಆಕಾಶ ಇಷ್ಟೆ ಯಾಕಿದೆಯೊ [ನನ್ನ್ ನೈನನನೈ] ಊಊಊ

ಈ ಭೂಮಿ ಕಷ್ಟ ಆಗಿದೆಯೊ [ನನ್ನ್ ನೈನನನೈ]



ನನ ನಾನ ನಾನ ನನ ದದ್ದ - ೩, ಆ, ಆ



ಕನಸಿನ ನೋಟಿಗೆ ಚಿಲ್ಲರೆ ಬೇಕೆ... ಓಓಓಓಓ

ನಗುವನ್ನು ಎಲ್ಲೊ ಮರೆತೆವು ಏಕೆ... ಓಓಓಓಓ

ಕಿಸೆಯಲ್ಲಿ ಕದ್ದ ಚಂದ್ರನ ಚೂರು, ನಮ್ಮನ್ನು ಪತ್ತೆ ಮಾಡುವರಾರು

ಹೋಳಾಗಿದೆ ಈ ಭೂಪಟ, ಹಾರಾಟವೆ ನಮ್ಮ ಹಟ

ಗಾಳಿಪಟ...ಗಾಳಿಪಟ...ಗಗ, ಗಾಗಗ..ಗಾಗಗ...ಗಾಳಿಪಟ...



ಕಾಮನ ಬಿಲ್ಲು ಬಾಳಿಗೆ ಉಂಟೆ... ಓಓಓಓಓ

ಸ್ನೇಹಕ್ಕು ಕೂಡ ರೇಶನ್ ಬಂತೆ... ಓಓಓಓಓ

ಸಂಭ್ರಮಕ್ಕಿಲ್ಲ ಸೀಜ಼ನ್ ಟಿಕೇಟು, ಏರಿಸಬೇಕು ನಮ್ಮ ರಿಬೇಟು

ಇದು ಪ್ರೀತಿಯ ಚಿತ್ರಪಟ, ಈ ದೋಸ್ತಿಯೆ ನಮ್ಮ ಚಟ

ಗಾಳಿಪಟ...ಗ...ಳಿಪತ..ಗಾಳಿಪಟ.



ಆಕಾಶ ಇಷ್ಟೆ ಯಾಕಿದೆಯೊ[ನನ್ನ್ ನೈನನನೈ] ಹಾಆಆಆಆ

ಈ ಭೂಮಿ ಕಷ್ಟ ಆಗಿದೆಯೊ[ನನ್ನ್ ನೈನನನೈ]

ಇಲ್ಲೇನೊ ಸರಿಯಿಲ್ಲ ಇನ್ನೇನೊ ಬೇಕಲ್ಲ

ನಕ್ಷತ್ರ ಲೊಕಕ್ಕೆ, ಲಗ್ಗೆ ಇಟ್ಟು ಹಾರೊ ನಾವೆ, ಗಾಳಿಪಟ

ಗಾಳಿಪಟ...[ನನ್ನ್ ನೈನನನೈ] - ೩ - [ನೈ ನೈ] [ನನ್ನ್ ನೈನನನೈ]


Minchaagi Neenu Baralu Ninthalliye malegaala

ಸಂಗೀತ : ವಿ.ಹರಿಕೃಷ್ಣ


ಸಾಹಿತ್ಯ : ಜಯಂತ್ ಕಾಯ್ಕಣಿ

ಹಾಡಿದವರು : ಸೋನು ನಿಗಮ್



****************************

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ

ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ

ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ

ಇನ್ನೆಲ್ಲಿ ನನಗೆ ಉಳಿಗಾಲ

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ

ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ



ನಾ ನಿನ್ನ ಕನಸಿಗೆ ಚಂದಾದಾರನು

ಚಂದಾ ಬಾಕಿ ನೀಡಲು ಬಂದೇ ಬರುವೆನು

ನಾ ನೇರ ಹೃದಯದ ವರದಿಗಾರನು

ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು

ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು

ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು



ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ

ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ



ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ

ಕನ್ನ ಕೊರೆದು ದೋಚಿ ಕೊಂಡ ನೆನಪುಗಳಿಗೆ ಪಾಲುದಾರ

ನನ್ನ ಈ ವೇದನೆ ನಿನಗೆ ನಾ ನೀಡೆನು

ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು



ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ

ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ

ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ

ಇನ್ನೆಲ್ಲಿ ನನಗೆ ಉಳಿಗಾಲ



Nadheem dheem thana ...

ಸಾಹಿತ್ಯ : ಯೋಗರಾಜ ಭಟ್


ಸ೦ಗೀತ : ಹರಿಕೃಷ್ಣ

ಗಾಯಕಿ : ಚಿತ್ರ ಕೆ ಎಸ್



ನಧೀಮ್ ಧೀಮ್ ತನ ನಧೀಮ್ ಧೀಮ್ ತನ

ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ



ನಧೀಮ್ ಧೀಮ್ ತನ ನಧೀಮ್ ಧೀಮ್ ತನ

ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದ೦ಗ

ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ

ಈ ಕಣ್ಣಿನ ಕವನ ಓದೊ ಓ ಹುಡುಗ



ನಧೀಮ್ ಧೀಮ್ ತನ ನಧೀಮ್ ಧೀಮ್ ತನ

ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ



ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ

ಆಡುತ ತೇಲಾಡುತ ಜ್ವರವೇರಿಸು ಮಳೆಯಲ್ಲಿ

ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ

ದುಂಡು ಮುಖದ ರಾಜಕುಮಾರ ಕೋಟೆ ದಾಟಿ ಬಂದ ಕಥೆಗೆ

ನಾಯಕ ನೀನೇ... ಆ ಚಂದಮಾಮ ಕಥೆಗೆ ನಾಯಕಿ ನಾ



ನಧೀಮ್ ಧೀಮ್ ತನ ನಧೀಮ್ ಧೀಮ್ ತನ

ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ



ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು

ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು

ನಿದ್ದೆ ಬರದ ಕಣ್ಣಾ ಮೇಲೆ ಕೈಯಾ ಮುಗಿವೆ ಚುಂಬಿಸು ನೀ

ನಾನೆ ನಾಚಿ ನಡುಗೊ ವೇಳೆ ಮಲ್ಲೆ ಹೂವ ಮುಡಿಸೊ ಒಮ್ಮೆ

ನಾನು ಭೂಮಿ ಆವರಿಸು ಸುರಿವ ಮಳೆಯಂತೆ ನನ್ನ



ನಧೀಮ್ ಧೀಮ್ ತನ ನಧೀಮ್ ಧೀಮ್ ತನ

ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದ೦ಗ

ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ

ಈ ಕಣ್ಣಿನ ಕವನ ಓದೊ ಓ ಹುಡುಗ



Kavithe Kavithe neeneke padagalali kulithe

ಸಾಹಿತ್ಯ: ಹೃದಯಶಿವ ; ಸಂಗೀತ: ವಿ. ಹರಿಕೃಷ್ಣ ; ಗಾಯನ: ವಿಜಯ್ ಪ್ರಕಾಶ್


ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ

ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ

ನನ್ನೆದೆಯಾ ಗೂಡಲ್ಲಿ ಕವಿತೆಗಳ ಸಂತೆ

ಓ ಒಲವೆ ನೀ ತಂದ ಹಾಡಿಗೆ ನಾ ಸೋತೆ



ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ

ಮನದ ಕಡಲಾ ದಡ ದಾಟೋ ಅಲೆಗಳಲೂ ನಲುಮೆ

ಹೊಮ್ಮುತಿದೆ ರಾಗದಲಿ ಸ್ವರ ಮೀರೋ ತಿಮಿರು

ಚಿಮ್ಮುತಿದೆ ಸುಳ್ಳಾಡುವ ಕವಿಯಾದ ಪೊಗರು



ಮುಗಿಲಾ ಹೆಗಲಾ ಮೇಲೇರಿ ತೇಲುತಿದೆ ಹೃದಯಾ

ಮಾಡಿಲಾ ಹುಡುಕಿ ಎದೆ ಬಾಗಿಲಿಗೆ ಬಂತೋ ಪ್ರಣಯ

ಉನ್ಮಾದ ತಾನಾಗಿ ಹಾಡಾಗೊ ಸಮಯಾ

ಏಕಾಂತ ಕಲ್ಲನ್ನು ಮಾಡುವುದೋ ಕವಿಯಾ

Onde Samanw nittusiru - Jeeva kaleva amruthake

ಒಂದೇ ಸಮನೇ ನಿಟ್ಟುಸಿರುAha ee bedaru bombege jeeva bandiruva haagide


ಪಿಸುಗುಡುವ ತೀರದ ಮೌನ

ತುಂಬಿ ತುಳುಕೊ ಕಂಗಳಲಿ

ಕರಗುತಿದೆ ಕನಸಿನ ಬಣ್ಣ

ಎದೆಯಾ ಜೊಪಡಿಯಾ ಒಳಗೆ

ಕಾಲಿಡದೆ ಕುಲುಕಿದೆ ಒಲವು

ಮನದ ಕಾರ್ಮುಗಿಲಿನ ತುದಿಗೆ

ಮಳೆಬಿಲ್ಲಿನಂತೆ ನೋವು

ಕೊನೆಯಿರದ ಏಕಾಂತವೆ ಒಲವು



ಒಂದೇ ಸಮನೇ ನಿಟ್ಟುಸಿರು

ಪಿಸುಗುಡುವ ತೀರದ ಮೌನ

ತುಂಬಿ ತುಳುಕೊ ಕಂಗಳಲಿ

ಕರಗುತಿದೆ ಕನಸಿನ ಬಣ್ಣ



ಜೀವ ಕಳೆವ ಅಮೃತಕೆ

ಒಲವೆಂದು ಹೆಸರಿಡಬಹುದೆ

ಪ್ರಾಣ ಉಳಿಸೋ ಕಾಯಿಲೆಗೆ

ಪ್ರೀತಿ ಎಂದೆನ್ನಬಹುದೆ

ಹೊಂಗನಸಾ ಚಾದರದಲ್ಲಿ

ಮುಳ್ಳಿನ ಹಾಸಿಗೆಯಲಿ ಮಲಗಿ

ಯಾತನೆಗೆ ಮುಗುಳ್ನಗು ಬರಲು

ಕಣ್ಣಾ ಹನಿ ಸುಮ್ಮನೆ ಒಳಗೆ

ಅವಳನ್ನೆ ಜಪಿಸುವೆದೆ ಒಲವೆ



ಜೀವ ಕಳೆವ ಅಮೃತಕೆ

ಒಲವೆಂದು ಹೆಸರಿಡಬಹುದೆ

ಪ್ರಾಣ ಉಳಿಸೋ ಕಾಯಿಲೆಗೆ

ಪ್ರೀತಿ ಎಂದೆನ್ನಬಹುದೆ



ನಾಲ್ಕು ಪದದ ಗೀತೆಯಲಿ

ಮಿಡಿತಗಳ ಬಣ್ಣಿಸಬಹುದೆ

ಮೂರು ಸ್ವರದ ಹಾಡಿನಲಿ

ಹೃದಯವನು ಹರಿಬಿಡಬಹುದೆ



ಉಕ್ಕಿಬರುವಾ ಕಂಠದಲಿ

ನರಳುತಿದೆ ನಲುಮೆಯ ಗಾನ

ಬಿಕ್ಕಳಿಸುವಾ ಎದೆಯೊಳಗೆ

ನಗುತಲಿದೆ ಮಡಿದಾ ಕವನ

ಒಂಟಿತನದ ಗುರುವೇ ಒಲವೇ.............





ಸಾಹಿತ್ಯ : ಜಯ೦ತ್ ಕಾಯ್ಕಿಣಿ


ಸ೦ಗೀತ : ಹರಿಕೃಷ್ಣ

ಗಾಯನ : ಅನುರಾಧ ಶ್ರೀರಾಮ್, ಉದಿತ್ ನಾರಾಯಣ್



ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ

ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ

ಹೆ :ನೆನಪಿನ ಜಾತ್ರೆಯಲಿ ಅಲಿದು ನಾ ಕನಸಿನ ಕನ್ನಡಿಯ ಕೊಳ್ಳಲೆ

ಗ೦:ನಿನ್ನಯ ದಾರಿಯಲಿ ಅಂದಿನ ಹೃದಯದ ಅಂಗಡಿಯ ತೆರೆಯಲೆ



ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ

ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ



ಹೆ :ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ

ಗ೦:ಮುಂಗೋಪವೇನು ನಿನ್ನ ಮೂಗುತಿಯೆ

ಹೆ :ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ

ಗ೦:ಚಂದ್ರನ ಕರೆದಿಲ್ಲಿ ದೋಸೆಯ ತಿನಿಸುವೆಯ

ಹೆ :ಹುಟ್ಟೊ ದಿಲ್ಲಿಯಲಿ ಮನಸ ತಲುಪೆವೆಯ

ಗ೦:ಓ ಕಳೆದು ಹೋಗಿರುವೆ ದಾರಿ ತಿಳಿಸುವೆಯ



ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ

ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ



ಗ೦:ಪ್ರೀತೀಗೆ ಯಾಕೆ ಈ ಉಪವಾಸ

ಹೆ :ಯಾತಕ್ಕು ಇರಲಿ ನಿನ್ನ ಸಹವಾಸ

ಗ೦:ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ

ಹೆ :ನೆನಪಿನ ಕೊಟ್ಟಿಗೆಗೆ ನಿನ್ನನ್ನೆ ನೂಕಿರುವೆ

ಗ೦:ನಂಬಿ ಕೆಟ್ಟಿರುವೆ ಏನು ಪರಿಹಾರ

ಹೆ :ನಿನಗೆ ಕಟ್ಟಿರುವೆ ಮನದ ಗಡಿಯಾರ



ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ

ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ

ಹೆ :ನೆನಪಿನ ಜಾತ್ರೆಯಲಿ ಅಲಿದು ನಾ ಕನಸಿನ ಕನ್ನಡಿಯ ಕೊಳ್ಳಲೆ

ಗ೦:ನಿನ್ನಯ ದಾರಿಯಲಿ ಅಂದಿನ ಹೃದಯದ ಅಂಗಡಿಯ ತೆರೆಯಲೆ









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು